ಪ್ರಧಾನ ಕಾರ್ಯದರ್ಶಿ
ಶ್ರೀ ವೆಂಕಟೇಶ್ ಹೂಗಾರ
ಮೂಲತಃ ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದ ವೆಂಕಟೇಶ ಹೂಗಾರ ಬಿಎ ಪದವಿಯನ್ನು ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಎಸ್ ಎಸ್ಎಮ್ ಪದವಿ ಮಹಾವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಎಂಎ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ.
2003ರ ಎಪ್ರಿಲ್ ನಿಂದ ಆಕಾಶವಾಣಿ ರಾಯಚೂರು ಕೇಂದ್ರದಲ್ಲಿ ತಾತ್ಕಾಲಿಕ ಉದ್ಘೋಷಕನಾಗಿ ವೃತ್ತಿ ಆರಂಭಿಸಿ ಯುವವಾಣಿ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. 2009ರಲ್ಲಿ ರಾಯಚೂರಿನ ಸ್ಥಳೀಯ ಇನ್ ಕೇಬಲ್ ವಾಹಿನಿಯಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿ ನಂತರ ಈಶಾನ್ಯ ಟೈಮ್ಸ್ , ಜನವಾದಿ ಹಾಗೂ ವಿಜಯವಾಣಿ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಸುದ್ದಿಮೂಲ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸದ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Contact : 9739334156
Email ID : venkatesh.h90@gmail.com
